ಪೋಸ್ಟ್‌ಗಳು

ಮಳೆ

ಇಮೇಜ್
  ಮಳೆ   ಬಸವಳಿದಿಹ ಇಳೆಯೂ ಸತ್ತಂತಿಹ ಮೊಳೆಯೂ ಕಾಯುತಿಹರು ಮಳೆಗಾಗಿ ಮಳೆಯ ಸಂಗಕಾಗಿ.. ಮೋಡಗಳ ಮಿಲನವಾಗಿ ಗುಡುಗು ಮಿಂಚಿನೊಡಗೂಡಿ ಆಗಮಿಸಿದ ಮಳೆರಾಯ ಭುವಿಯ ಭೇಟಿಗಾಗಿ! ಧರೆ ಮಿಂದು ತಂಪಾಗಲು ಮೊಗ್ಗರಳಿ ಹಿರಿದಾಗಲು ಹಸಿರು ಸೀರೆಯುಟ್ಟಳು ನೀರೆ ಪ್ರಕೃತಿ ಮಾತೆಯು.. ವನಧಿ ತುಂಬಿ ತುಳುಕಲು ವದನದಿ ನಗು ಮೂಡಿತು. ಜೀವಿಗಳ ಜೀವ ತುಂಬೋ ಇಳೆ ಮಳೆಯ ಮಿಲನವಾಯ್ತು..

ನೆನಪು

ಇಮೇಜ್
  ಬಸ್ಸಿನಲ್ಲಿ ಕುಳಿತು ಕಿಟಕಿಯಾಚೆ ಮಳೆಯ ಬರುವಿಕೆಯನ್ನೇ ನೋಡುತ್ತಿದ್ದ ನನಗೆ ನನ್ನ-ನಿನ್ನ ನೆನಪುಗಳೆಲ್ಲವೂ ಒಂದೊಂದಾಗಿ ಮನದಲ್ಲಿ ಪುಟಿಯುತ್ತಿದ್ದವು.. ಒಂದೊಂದೇ ಮಳೆ ಹನಿ ಕಿಟಕಿಗಾಜಿಗೆ ಬಂದು ಪುಟಿದಂತೆ;

ಮನದಾಳದ ಮಾತು - ೪

 ಮನದಾಳದ ಇಂಗಿತವ, ಅದೆಂತಹ ಶಬ್ದಗಳ ದಾರದಿಂದ ಅದ್ಯಾವ ಭಾವನೆಗಳ ಮಣಿಗಳಿಂದ ಚೊಕ್ಕವಾಗಿ ಪೋಣಿಸಿ,  ಮಾಲೆಯಾಗಿರಿಸಿದರೂ ಅದೊಂದು ಮಾಮೂಲಿ ಹಾರವಷ್ಟೇ ಮನವರಿಯಲು, ಮನಸಿಲ್ಲದವರಿಗೆ... ಮೌನವೇ ಲೇಸು, ಹೃದಯವ ಬಿಚ್ಚಿಡುವುದಕ್ಕಿಂತ...  ಮೌನವೇ ಸೊಗಸು,  ಮಾತಲ್ಲಿ ಸೋತು, ನೋವುಣ್ಣುವುದಕ್ಕಿಂತ.. 

ಏನೋ ಒಂಥರಾ ಕಚಗುಳಿ..

ಇಮೇಜ್
  ಏನೋ ಒಂಥರಾ ಕಚಗುಳಿ... ಎಂದಿನಂತೆ ಬಸ್ ಇಂದ ಇಳಿದು,‌ ಕಾಲೇಜ್ ಕ್ಯಾಂಪಸ್ಗೆ ಕಾಲಿಟ್ಟಳು ಕಣ್ಮಣಿ. ತಾನಾಯ್ತು, ತನ್ನ ಪಾಡಾಯ್ತು ಎನ್ನುವಂತಿದ್ದ ಆಕೆ, ಯಾರೊಂದಿಗೂ ಅನಗತ್ಯ ಮಾತಿಗಿಳಿದವಳಲ್ಲ. ಒಂಥರಾ ಇಂಟ್ರೋವರ್ಟ್ ಆದರೂ ಒಮ್ಮೆ ಆಪ್ತರಾದರೆ ಕಪ್ಪೆಯಂತೆ ವಟಗುಟ್ಟುತ್ತಿದ್ದಳು. ಅದರಲ್ಲೂ ಹುಡುಗರೆಂದರೆ ಸ್ವಲ್ಪ ಡಿಸ್ಟೆನ್ಸ್ ಇದ್ದೇ ಇತ್ತು. ಅಂತಹ ಕಣ್ಮಣಿಗೆ ಅವಳ ಫ್ರೆಂಡ್ಸ್ 'ಒನ್ ಮ್ಯಾನ್ ಆರ್ಮಿ' ಎಂದು ಯಾವಾಗಲೂ ಟೀಕಿಸುತ್ತಿದ್ದರು. ಏನನ್ನೋ ಯೋಚಿಸುತ್ತಾ ನಡೆಯುತ್ತಿದ್ದ ಕಣ್ಮಣಿ ಎದುರಿನಿಂದ ಒಬ್ಬ ನಡೆದು ಬರುತ್ತಿದ್ದ. ಎಂದೂ, ಯಾರನ್ನೂ ನೋಡಿದಾಗ ಆಗದ ವಿಚಿತ್ರ ಭಾವ ಅವನನ್ನು ನೋಡಿದಾಗ ಅವಳಿಗಾಯಿತು. ಮೊದಲ ಸಲ..ಸುತ್ತಲಿನ ಹಸಿರಿನ ರಮ್ಯತೆ, ಮುದ ನೀಡುತ್ತಾ ರೋಮಾಂಚನಗೊಳಿಸಿತು! ಬೀಸುತ್ತಿರುವ ತಣ್ಣನೆಯ ಗಾಳಿ ಮೊದಲ ಬಾರಿಗೆ ಕಚಗುಳಿಯಿಟ್ಟಂತಾಯಿತು! ..... ಆತ......, ಮನ್ಮಥನಲ್ಲದಿದ್ದರೂ ಸುಂದರನೇ! ಮುಖದಲ್ಲಿದ್ದ ಮಂದಹಾಸವೇ ಸಾಕಿತ್ತು ಅವನ ಅಂದ ಹೆಚ್ಚಿಸಲು. ‘ಯಾರಿವನು..?!’ ಎಂದು ಯೋಚಿಸುತ್ತಾ , ಕಳೆದು ಹೋಗಿದ್ದ ಕಣ್ಮಣಿ ಎಚ್ಚೆತ್ತುಕೊಳ್ಳುವಾಗಲೇ ಆತ ಮಾಯವಾಗಿದ್ದ.  ‘ ಯಾವುದೋ ಲೋಕದಲ್ಲಿ ವಿಹರಿಸದೇ ಇದ್ದಿದ್ದರೆ, ಅವನು ಯಾವ ಕಡೆ ಹೋದನೆಂದಾದರೂ ತಿಳಿದುಕೊಳ್ಳಬಹುದಿತ್ತು. ಛೇ! ಎಂಥಾ ಕೆಲಸವಾಯ್ತು’ ಎಂದು ತನ್ನನ್ನೇ ಶಪಿಸುತ್ತಾ ಕ್ಲಾಸ್ಗೆ ತೆರಳಿದಳು. ‘ಅಯ್ಯೋ! ಹೇಗಿದ್ದೆ ಕಣ್ಮಣಿ.!! ಹುಡುಗರನ್ನು ಕಣ್ಣೆತ್ತ...

ಅಮ್ಮ...

  ಅಮ್ಮ…… ಸಂಸಾರ ನೌಕೆಯ 'ಹುಟ್ಟು' ಇವಳು.. ಅತ್ಯಮೂಲ್ಯ ಜೀವ ಹುಟ್ಟಿಸಿ, ತನ್ನ ಹುಟ್ಟಿಗೆ ಕಾರಣಳಾದವಳು.. ಕಷ್ಟಗಳ ತೆರೆ ಅಪ್ಪಳಿಸಿದರೂ.., ಹೋರಾಡುವಳು.. ಸಹಿಸಿ ಮುನ್ನಡೆವಳು.. ಅಮ್ಮಾ... ಹೊತ್ತವಳು..ಹೆತ್ತವಳು.. ಮಕ್ಕಳಿಗೆ ಪ್ರೀತಿಯ ಅರ್ಥವೇ ಈಕೆ.. ಮಮತೆಯ ಸ್ವರೂಪ.,ಆರಾಧ್ಯ ದೈವ.. ಗದರುವಳು.., ಬೆದರುವಳು, ಕೊನೆಗೆ , ತನ್ನೊಳಗೆ ಸಂಕಟ ಪಡುವಳು.. ಸುಂಟರಗಾಳಿಗೂ ಹೆದರದ ಅಮ್ಮ ಪರದಾಡುವಳು, ಮಗುವಿನ ಕೂಗಿಗೆ.. ತನ್ನೆಲ್ಲಾ "ಬೇಕು"ಗಳನ್ನು, ಆಸೆಗಳನ್ನು "ಬೇಡ"ವಾಗಿಸಿಕೊಂಡವಳು.. ತನ್ನ ಕನಸನ್ನು ಮಗುವಿನ ಕಣ್ಣಲ್ಲಿ ಕಾಣುವಳು.. ಸಹನಾಮೂರ್ತಿಯೂ ಈಕೆಯೇ.. ತ್ಯಾಗದ ಪ್ರತಿರೂಪವೂ ಈಕೆಯೇ.. ಅವಳೇ... ಅಮ್ಮಾ.. ನನ್ನಮ್ಮಾ.. ಮಕ್ಕಳ ಅಸ್ತಿತ್ವದಲ್ಲಿ ತನ್ನ ಇರುವಿಕೆಯನ್ನು ಕಾಣುವವಳು..

ಮಾಯಾಲೋಕ

  ಮಾಯಾಲೋಕ ಭಾವನೆಗಳಿಗೆ ಅವಮಾನವಿಲ್ಲ.. ಬೇಸರ, ಕೋಪವೂ ಅಲ್ಲಿಲ್ಲ.. ಶಾಂತತೆಯ ಮಡುವಲಿ ತೃಪ್ತ ಸುಪ್ತ ಸಾಗರದಲಿ ಈ ನನ್ನ ಲೋಕವಿತ್ತು.. ಸುಮದ ಘಮದೊಳು ಮಧು ಹೀರುವ ದುಂಬಿಯು ಸಕಲ ಜೀವಿಗಳೂ ಸಂತಸವ ಹೊರಹಾಕುತಿತ್ತು.. ವಂಚಕ, ಲಂಚಕರಿಲ್ಲ.. ಕಾಮಿಗಳು, ಕ್ರೂರಿಗಳಿಲ್ಲ.. ಸುಗುಣ ಮಾನವನೊಳ್ ಸುವಿಚಾರಗಳಷ್ಟೇ ಇತ್ತು.. ತರತಮ ಭಾವವಿಲ್ಲ.. ಸಮಾನತೆಯೇ ಎಲ್ಲಾ.. ಐಕ್ಯತೆ ಹೊಂದಿದ ಜೀವಿಗಳಲಿ ಸಹಬಾಳ್ವೆ ಇತ್ತು.. ಶೋಷಣೆ, ಕಣ್ಣೀರಿಗೆ ಜಾಗವಿಲ್ಲ.. ಬಂಧು ಬಾಂಧವರೇ ಎಲ್ಲಾ.. ಇಹುದೆಲ್ಲಿ ಈ ಲೋಕ ? ಕನಸಿನ ನನ್ನರಮನೆಯಲ್ಲಿ.. ನನ್ನದೇ ಮಾಯಾಲೋಕದಲ್ಲಿ..

ಸಣ್ಣ ಕಥೆ -೫

          ಕಾಲದ ಮಹಿಮೆ ಪ್ರಸಾದ್ ಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ದೊರೆತಿದ್ದರಿಂದ ತಂದೆ ತಾಯಿಯೊಂದಿಗೆ ಸಂತಸದಿಂದಿದ್ದ. ಪದ್ಮಳನ್ನು ಪ್ರೀತಿಸುತ್ತಿದ್ದ ಪ್ರಸಾದ್ ಮನೆಯವರ ಒಪ್ಪಿಗೆಯಂತೆ ಮದುವೆಯೂ ಆದ, ಮಕ್ಕಳೂ ಆದರು. ಮದುವೆಯಾಗಿ 2-3 ವರ್ಷ ಎಲ್ಲರೂ ಜೊತೆಯಾಗಿದ್ದರೂ, ಪದ್ಮಳಿಗೆ ವಯಸ್ಸಾಗುತ್ತಿದ್ದ ಅತ್ತೆ-ಮಾವ ಮನೆಗೆ ಭಾರವೆನಿಸಿದರು. ಮಾತು ಮಾತಿಗೂ ಗಂಡನೆದರು ಬೈಯತೊಡಗಿದಳು. ಮೊದಮೊದಲು ಪ್ರಸಾದ್ ಪದ್ಮಳನ್ನು ಸಮಾಧಾನಪಡಿಸುತ್ತಿದ್ದರೂ, ನಂತರ ಆಕೆ ಹೇಳುವ ಮಾತೇ ಸರಿಯೆನ್ನಿಸತೊಡಗಿತು. ಇಬ್ಬರನ್ನೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ರಸಾದ್ ಪದ್ಮ ನಿರ್ಣಯಿಸಿದರು. ಆತನ ತಂದೆ-ತಾಯಿ ಎಷ್ಟೇ ಗೋಗರೆದರೂ, ಅಂಗಲಾಚಿದರೂ ಕೇಳದೆ ಒಂದಿಷ್ಟು ಹಣ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿಯೇ ಬಿಟ್ಟನು.           ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟವರನ್ನೇ ಮರೆತಿದ್ದ ಪ್ರಸಾದ್ ಗೆ ಈಗ ತನ್ನ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವಾಗ, "ನಮಗೆ ಬೇಕಾಗಿರುವುದು ನಿನ್ನ ಶ್ರೀಮಂತಿಕೆಯಾಗಲೀ,‌ ಹಣವಾಗಲೀ ಅಲ್ಲ. ನಿನ್ನ ಪ್ರೀತಿ,‌ ಸಮಯವಷ್ಟೇ" ಎಂದು ಹಿಂದೆ ತಾನು ವೃದ್ಧಾಶ್ರಮಕ್ಕೆ ಸೇರಿಸುವಾಗ ತನ್ನ ತಂದೆ-ತಾಯಿ ಹೇಳಿದ್ದ ಈ ಮಾತುಗಳು ನೆನಪಾಗಿ ಕಣ್ಣ ಹನಿ ಕೆಳಗೆ ಜಾರಿತ್ತು.           ಇದೆಲ್ಲವನ್ನೂ ನೋಡಿ ಕ...

ಸಂಸ್ಕೃತದಲ್ಲಿಹುದು ಸಂಸ್ಕೃತಿ

            ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಹರಿದು ಬರುತ್ತದೆ. ಅವುಗಳಲ್ಲೊಂದು ವಿಶ್ವ ಸಂಸ್ಕೃತ ದಿನ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ. ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ.            ಸರ್ವಸ್ವವನ್ನೂ ತನ್ನಲ್ಲಿ ಇಟ್ಟುಕೊಂಡ ವಿಶ್ವಕೋಶ. ಇದು  ಎಲ್ಲ ಭಾಷೆಗಳ ಜನನಿ. ಸಂಸ್ಕೃತವು ವಿಶಿಷ್ಟವಾದ, ಸುಲಲಿತವಾದ ಭಾಷೆ. ವೇದ-ವೇದಾಂಗ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇವುಗಳಿರುವುದು ಸಂಸ್ಕೃತದಲ್ಲಿ. ಅರ್ಥಶಾಸ್ತ್ರ, ವೇದಗಣಿತ, ನೀತಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ನ್ಯಾಯ, ಧರ್ಮ, ರಾಜನೀತಿ, ವ್ಯವಹಾರ, ನಾಟ್ಯ, ಕಲೆ ಇವುಗಳ ತವರೂರು ಸಂಸ್ಕೃತ. ಯಾವುದೇ ವಿಷಯವನ್ನಾಗಲಿ ಆಳವಾಗಿ ತಿಳಿಯಬೇಕೆಂದರೆ ಅದಕ್ಕೆ  ಸಂಸ್ಕೃತ ಬೇಕು.             ‘ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು  ಸಂಸ್ಕೃತಿ’. ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಮ್ಮ ಭಾರತೀಯ ಸಂಸ್ಕೃತಿ ಅವಿಚ್ಛಿನ್ನವಾಗಿ, ಅವ್ಯಾಹತವಾಗಿ ಹರಿದು ಬರಲು ಕಾರಣ ಸಂಸ್ಕೃತವೇ. ಒಬ್ಬ ವ್ಯಕ್ತಿ ಮಾನಸಿಕವಾಗಿ, ಬೌದ್ಧಿಕವಾಗಿ, ನಿಷ...

ಭಾವದಲೆ

ಇಮೇಜ್
ರಭಸದಿ ನುಗ್ಗುವ ಕೋಪ ಸ್ವಪ್ರತಿಷ್ಠೆಯಲಿ,  ಕೈಬೀಸಿ ಕರೆಯುತಿದೆ ಅಡಗಿಹ ಮಾತುಗಳನು... ಮುನಿಸಿನಲಿ ಸಿಲುಕಿ ಪರಿತಪಿಸುತಿರೆ, ಮೂಲೆಯಲವಿತಿಹ ಅಶ್ರುಗಳೂ ತೊಯ್ಯುತಿವೆ ಅಕ್ಷಿಗಳನು... ಆವೇಶದಿ ಹೂಡಿದ  ಬಾಣಗಳಿಂದ ಖಾಲಿ ಖಾಲಿಯಾಗಿವೆ ತಾಳ್ಮೆಯ ಬತ್ತಳಿಕೆ! ಆವರಿಸಿರುವ ಯೋಚನೆಗಳ ಹತ್ತಿಕ್ಕಲಾಗದೆ ಬೇಲಿ ಕಟ್ಟುತಿರುವೆ ಮನದ ಸೀಮೆಗೆ...

ಅಲೆಮಾರಿಯಾಗುವಾಸೆ..

ಇಮೇಜ್
ಲೋಕವನ್ನೇ ಮರೆತು ಪ್ರಕೃತಿಯಲಿ ಬೆರೆತು ಸಾಗುವಾಸೆ.... ಬಿಡುವಿಲ್ಲದ ಯಾನದಲಿ ಅಂತ್ಯವಿರದ ಪಯಣದಲಿ ಮರೆತು, ಮೈಮರೆತು ನನ್ನ ನಾ ತಿಳಿಯುವಾಸೆ... ಹುಚ್ಚೆದ್ದು ಕುಣಿಯುವಾಸೆ.. ಅಲೆಯುವಾಸೆ... ಅಲೆಮಾರಿಯಾಗುವಾಸೆ....