ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನಸ್ಸುಗಳು..

ಇಮೇಜ್
  ನಾನು ನೀನೆಂಬ ಎರಡು ಮನಗಳಲ್ಲಿ ನನ್ನಳುವು ನನ್ನಲ್ಲಿ , ನನ್ನ ನಗುವು ನಿನ್ನಲ್ಲಿ ಲೀನವಾಯ್ತು ನಿನ್ನ ಕ್ರಿಯೆಗಳಿಲ್ಲಿ.. ತುಂಟತನದಿ ಛೇಡಿಸುವ ನೆಪದಲಿ ಹಸಿಮುನಿಸಿನ ತುಸುಜಂಬದಲಿ ವೈಮನಸಿನ ಕದನದೊಳ್ ಬಂಧಿಯಾದೆನಿಲ್ಲಿ.. ಮನೋಗತಿಯಂತೆ, ಆತ್ಮರತಿಯಂತೆ ಮನೋನುರಾಗದಲ್ಲಿದೆ ಮನಸುಗಳು..

ನನ್ನ ಮುದ್ದಿನ ಅಣ್ಣ

ಇಮೇಜ್
ಅಪಾರ ಪ್ರೀತಿಯ ಕೊಡುವನು ಅಗಾಧ ಲಕ್ಷ್ಯವನ್ನಿಡುವನು ಕೇಳಿದ್ದನ್ನು ಕೊಡಿಸುವನು ಇವನೇ ನನ್ನ ಮುದ್ದಿನ ಅಣ್ಣ.. ಕಷ್ಟದಲ್ಲಿರುವಾಗ ಕಾಪಾಡುವನು ಸಂತೋಷದಲ್ಲಿರುವಾಗ ಹರಸುವನು ಭಯದಿಂದಿದ್ದರೆ ಧೈರ್ಯ ತುಂಬುವನು ಇವನೇ ನನ್ನ ಮುದ್ದಿನ ಅಣ್ಣ.. ತಪ್ಪು ಮಾಡಿದರೆ ಬುದ್ಧಿ ಹೇಳುವನು ಕೋಪದಲ್ಲಿದ್ದರೆ ಸಮಾಧಾನ ಮಾಡುವನು ಕೋಪ ಬಂದರೆ ಕ್ಷಣದಲ್ಲಿ ಮರೆಯುವನು ಇವನೇ ನನ್ನ ಮುದ್ದಿನ ಅಣ್ಣ.. ಅನೇಕ ಕೆಲಸ ಮಾಡುವನು ಅಪ್ಪಟ ಪ್ರಾಮಾಣಿಕನಿವನು ವರ್ಣಿಸಲಸಾಧ್ಯವು ಇವನ ಹಿರಿಮೆಯನು ಇವನೇ ನನ್ನ ಮುದ್ದಿನ ಅಣ್ಣ.. ಚಿತ್ರ: ವೈಷ್ಣವಿ ಕೆ 

ದಿಟ್ಟ ಹೆಜ್ಜೆ...!

ಇಮೇಜ್
  ಚಿತ್ರ: ವೈಷ್ಣವಿ ಕೆ  "ಜಯ್, ನಿನಗೆ ಇಟ್ಟ ಹೆಸರಿಗೆ ತಕ್ಕಂತೆ ಜೀವನದಲ್ಲಿ ಜಯಶಾಲಿಯಾಗು ಮಗನೇ.. " ಎಂದು ಹುಟ್ಟಿದ ಹಬ್ಬದಂದು ನಮಸ್ಕರಿಸಲು ಬಂದ ಮಗನಿಗೆ ಆಶೀರ್ವದಿಸಿದರು ಆಕಾಶ್ ಮತ್ತು ಆಶಾ ದಂಪತಿಗಳು. "ನನ್ನ ಹೆಸರಿಗೆ, ನನ್ನ ಜಯಕ್ಕೆ ಕಾರಣ ನೀವಿಬ್ಬರೇ ಅಲ್ಲವೇ? ನೀವು ಅಂದು ಇಟ್ಟ ದಿಟ್ಟ ಹೆಜ್ಜೆಯಿಂದಲೇ ಇಂದು ಹೀಗಿದ್ದೇನೆ ನಾನು" ಎಂದ ಜಯ್. ಆಗ, ಆಕಾಶ್ ಮತ್ತು ಆಶಾ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡರು. ಜಯ್ ತರಗತಿಯಲ್ಲಿ ಅತಿ ಬುದ್ಧಿವಂತನಲ್ಲದಿದ್ದರೂ ಹೆಡ್ಡರ ಸಾಲಿನಲ್ಲಿರಲಿಲ್ಲ. ಓದುವುದು ಅವನಿಗೆ ಇಷ್ಟದ ಕೆಲಸವಾದರೂ ಪಠ್ಯ ವಿಷಯ ಓದುವುದು ಆಗದ ಕೆಲಸವೇ. ಹಾಡುವುದು, ತನಗನಿಸಿದ್ದನ್ನು ಬರೆಯುವುದು ಅವನ ಹವ್ಯಾಸವಾಗಿತ್ತು. ಆದರೆ ಅದು ಅವನ ಹೆತ್ತವರಿಗೆ ಇಷ್ಟವಿರಲಿಲ್ಲ. ಹೆಚ್ಚು ಅಂಕಗಳಿಸಬೇಕು, ಅದಕ್ಕಾಗಿ ಸದಾ ಪಠ್ಯ ಪುಸ್ತಕಗಳನ್ನು ಓದಬೇಕು ಎನ್ನುವ ಒತ್ತಡ ಹೇರುತ್ತಿದ್ದರು. ಪಿಯುಸಿಯಲ್ಲಿ ಪೋಷಕರ ಬಲವಂತದ ಮೇರೆಗೆ ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದ. ಪಕ್ಕದ ಮನೆಯವರ ಮಕ್ಕಳೊಡನೆ, ಸಂಬಂಧಿಕರ ಮಕ್ಕಳೊಡನೆ ತನ್ನನ್ನು ಹೋಲಿಕೆ ಮಾಡಿ ತನ್ನ ಅಮ್ಮ ಮಾತನಾಡುವುದನ್ನು ಮಾತ್ರ ಜಯ್ ಸಹಿಸುತ್ತಿರಲಿಲ್ಲ. ಪಿಯುಸಿ ಮುಗಿದ ನಂತರ ಡೋನೇಶನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. ಅವನಿಗೆ ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗುತ್ತಿದ್ದ. ಇಂಜಿನಿಯರಿಂಗ್ ಮುಗಿಸುವುದೇ ಕಷ್ಟವಾಗಿ

ಇಳಿವಯಸಿನಲಿ ತಾಯಿ

ಇಮೇಜ್
                   ಚಿತ್ರ : ವೈಷ್ಣವಿ ಕೆ. ನೀನರಿಯದ ವ್ಯಥೆ ನೂರಾರಿದೆ ಬತ್ತಿದ ಕಣ್ಣೀರು ಕಥೆ ಹೇಳಿದೆ ಇಳಿವಯಸಿನ ಏಕಾಂತಕೆ ಮನ ಬೆಂದಿದೆ ವಿಧಿಯಾಟಕೆ ನಗುವಲ್ಲದ ನಗು ಮೂಡಿದೆ ಬಸಿರಲ್ಲಿ ನಿನ್ನ ಕಾಪಾಡಿದೆ ಮಡಿಲಲ್ಲಿ ಸಲಹುತ್ತ ಹೆಣಗಾಡಿದೆ ಮಮತೆಯ ತೊಟ್ಟಿಲಲ್ಲಿ ತೂಗಾಡಿದೆ ಪ್ರೀತಿಯ ನಿನಗೆ ಮುಡಿಪಾಗಿಸಿದೆ.. ನಿನ್ನ ನಗುವಿಗಾಗಿ ನೆತ್ತರು ಬಸಿದೆ ನೀ ಅತ್ತಾಗ ಸಾವನ್ನು ನಾ ಬಯಸಿದೆ ನಿನ್ನಾಸೆಗಳ ನಿದ್ರಿಸದೆ ಪೂರೈಸಿದೆ ನಿನ್ನ ಬದುಕಿಗಾಗಿ ನನ್ನನ್ನೇ ಅಡವಿಟ್ಟಿಹೆ.. ಕರುಳಬಳ್ಳಿ ಕಡಿದು ದೂರಾದೆ ಈ ಸಂಬಂಧ ಮುರಿದು ಹೋದೆ ನನ್ನಾಂತರ್ಯವನ್ನೇ ಬಲಿ ನೀಡಿದೆ ಏಕೆ ಜೀವಂತ ಶವವಾಗಿಸಿದೆ.. ತುತ್ತನ್ನ ನೀಡಿದಾಕೆ ಕಸವಾದಳೇ.. ತಾಯಿ ಮಡಿಲೀಗ ಜೋಪಡಿಯೇ.. ಈ ಜಗವ ನೀನು ಅರಿತಾಯಿತೇ.. ಅಂತಸ್ತಿನ ಕಲ್ಲರಮನೆ ಹೆಚ್ಚಾಯಿತೇ.. ಈ ಮುಪ್ಪಲ್ಲು ನಿನ್ನ ಉಪಚರಿಸುವೆ ನಿನ್ನರಮನೆಯ ಮೂಲೆಯಲಿ ನಿದ್ರಿಸುವೆ.. ವೃದ್ಧಾಶ್ರಮವಾಸ ಬೇಡ ಕೂಸೆ.. ಬೇಗನೆ ಮಣ್ಣಲ್ಲಿ ಮಣ್ಣಾಗುವೆ..