ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾಲ್ಯದ ನೆನಪು..

ಇಮೇಜ್
         ಚಿತ್ರ: ವೈಷ್ಣವಿ ಕೆ         ಬಾಲ್ಯಜೀವನ ಅತಿಸುಂದರ. ಬಾಲ್ಯಜೀವನದ ನೆನಪು ಅತಿ ಮಧುರ. ಅಮ್ಮನು ನೀಡುವ ಕೈತುತ್ತು, ಅಜ್ಜಿಯು ಹೇಳುವ ನೀತಿಕಥೆ, ಅಪ್ಪನು ತೋರುವ ಸಾಗರದಂತಹ ಮಮತೆ, ಕಾಳಜಿ, ಅಜ್ಜನ ಆಕಾಶದೆತ್ತರದ ಪ್ರೀತಿ, ನಮ್ಮ ನಗುವಿನೊಂದಿಗೆ ಮನೆಯವರ ನಗು, ಇವುಗಳೊಂದಿಗೆ ಕಳೆದ ಬಾಲ್ಯ ಅದೆಷ್ಟು ಚೆಂದ?! ಮಾನವನ ಬದುಕಿನ ಅತ್ಯಮೂಲ್ಯ ಕಾಲಘಟ್ಟವೇ ಬಾಲ್ಯಜೀವನ. ಬಾಲ್ಯದಲ್ಲಿ ಅತ್ತು ಅಳಿಸಿದ, ನಕ್ಕು ನಗಿಸಿದ ಪ್ರತಿಯೊಂದು ಕ್ಷಣವೂ ನೆನಪಿನ ಬುತ್ತಿಯ ಪ್ರಮುಖ ಭಾಗವಾಗುತ್ತದೆ. ಬಾಲ್ಯದಲ್ಲಿ ಅಳುವಿನ ಹಿಂದೆಯೂ ನಗುವಿದ್ದರೆ, ನಲಿವಿದ್ದರೆ , ಬೆಳೆಯುತ್ತಾ ಹೋದಂತೆ ಅದು ಬದಲಾಗಿ ನಗುವಿನ ಹಿಂದೆ ನೋವಡಗುತ್ತದೆ. ಒಂದು ಮಾತಿದೆ 'ಬಾಲ್ಯ ಸುಂದರವಾದರೆ, ಅದರ ನೆನಪುಗಳನ್ನು ಮೆಲುಕು ಹಾಕುತ್ತಾ ಕಳೆಯುವ ಮುಪ್ಪು ಸುಂದರವಾಗುತ್ತದೆ' ಎಂದು. ಖಂಡಿತವಾಗಿಯೂ! ಮಗುವನ್ನು ನೋಡಿ ನಗದವರಾರು? ಬಾಲ್ಯವನ್ನೆಣಿಸಿ, ಮತ್ತೆ ಬಾಲ್ಯಕ್ಕೆ ಮರಳಬೇಕು ಎಂದು ಬಯಸದ ಮಾನವರಾರು? ಬಾಲ್ಯದ ನೆನಪನ್ನು ನೆನಪಿಸಿಕೊಂಡು ನಗದವರಾರು? ಮತ್ತೆ ಆ ಕ್ಷಣ ಬಾರದೆಂದು ತಿಳಿದು ಬೇಸರಿಸದೇ ಇರುವವರಾರು? ಬಾಲ್ಯವೇ ಹಾಗೆ..., ಸ್ಮೃತಿಯೇ ಹಾಗೆ.....!        ಸುಂದರವಾದ ಪುಷ್ಪಗಳಲ್ಲಿ ಒಂದನ್ನು ಆರಿಸಬೇಕೆಂದರೆ, ನಾವು ಅದರಲ್ಲಿ ಅತಿಸುಂದರ ಪುಷ್ಪವನ್ನರಸಿ ಆರಿಸುತ್ತೇವೆ. ಹಾಗೆಯೇ ಬಾಲ್ಯದ ಸ್ಮೃತಿಗಳ ಬುತ್ತಿಯನ್ನು ಬಿಚ್ಚಿದರೆ, ಹಾರಾಡುವ ಲೆಕ್ಕವಿಲ್ಲದಷ್ಟು ಸುಂ

ಕಲ್ಪನಾ ಲೋಕದಲ್ಲಿ ನಾನು..

ಇಮೇಜ್
ಹಸಿರು ಸೀರೆಯನ್ನುಟ್ಟ ನಾರಿಯಂತೆ ಪ್ರಕೃತಿ ಮಾತೆ ಕಂಗೊಳಿಸುತಿಹಳು ನೀರೆಯಂತೆ ಸೊಬಗಿನಿಂದ ಮಿಂಚುತ್ತಿದ್ದಳು ಕಣ್ಮನಸೆಳೆವಂತೆ ಮೂಕಳಾದೆ ನಾ ಆಕೆಗೆ ಮನಸೋತಂತೆ.. ತಾಯಿಯ ಮಡಿಲಲಿ ಮಲಗುವ ಮಗುವಂತೆ ಮಲಗಬೇಕು ನಾ ಆಕೆಯ ಮಡಿಲಲಿ ಕಂದಮ್ಮನಂತೆ ಬೀಸಬೇಕು ಗಾಳಿಯು ಜೋಗುಳ ಹಾಡುವಂತೆ ಸವಿಯಬೇಕು ತಂಗಾಳಿಯ ಮೈಮನ ಕುಣಿಯುವಂತೆ.. ಬೆಳದಿಂಗಳಿರಬೇಕು ಇರುಳಿನ ಸೌಂದರ್ಯ ಹೆಚ್ಚುವಂತೆ ಇವುಗಳ ಮಧ್ಯೆ ಮಲಗಬೇಕು ಈ ಲೋಕವನ್ನೇ ಮರೆತಂತೆ ಅನುಭವವಾಯಿತು ಹಕ್ಕಿಗಳ ಕಲರವ ಕೇಳಿದಂತೆ ಕಣ್ತೆರೆದೆ ನಾನು ನನಗೇ ತಿಳಿಯದಂತೆ.. ಮೂಡಣ ನೋಡಿದರೆ ಕಣ್ಣು ಕುಕ್ಕುವಂತೆ ಉದಯಿಸುತ್ತಿದ್ದ ಸೂರ್ಯ ಕೆಂಬಣ್ಣದ ದಾಸವಾಳದಂತೆ ಮುಂಜಾನೆಯ ಆಗಮನಕೆ ನನ್ನ ಮೊಗವಾಯಿತು ಕಳೆಗುಂದಿದಂತೆ ವಿಹರಿಸುತ್ತಿದ್ದೆ ಕಲ್ಪನಾ ಲೋಕದಲ್ಲಿ ನನಗೇ ಅರಿಯದಂತೆ... 

ಅನುರಾಗ (ಅಂತಿಮ ಭಾಗ)

ಇಮೇಜ್
 .. ಕಥೆಯನ್ನು ಮುಂದುವರಿಸುತ್ತಾ ಹಾಂ, ಹೂಂ ಎನ್ನುತ್ತಾ ಮೂರು ತಿಂಗಳು ಕಳೆದು ಹೋದವು. ಋತ್ವಿಕ್ನಲ್ಲಿ ಬಹಳ ಬದಲಾವಣೆಯಾಗಿತ್ತು. ದೈಹಿಕ‌ ಹಾಗೂ ಮಾನಸಿಕ ಆರೋಗ್ಯ ತುಂಬಾನೇ ಸುಧಾರಿಸಿತ್ತು. ವೈದ್ಯರಿಗೂ ಇದು ಆಶ್ಚರ್ಯವೇ ಆಗಿತ್ತು. ಏಕೆಂದರೆ ಡೆಲಿರಿಯಮ್ ಹಲವು ವರ್ಷಗಳ ಕಾಲ ಉಳಿಯಬಹುದಾದ ಮಾನಸಿಕ ಖಾಯಿಲೆ. ಋತ್ವಿಕ್ ಬಳಿ ವೈದ್ಯರು "ನೀವು ಪುಣ್ಯವಂತರೇ ಹೌದು. ಎಷ್ಟು ಬೇಗ ಗುಣಮುಖರಾಗಿದ್ದೀರಾ! ಯಾವುದೇ ಔಷಧಿಗಳ ಅಗತ್ಯ ನಿಮಗಿನ್ನಿಲ್ಲ. ಋತ್ವಿಕ್, ಇನ್ನು ಒಳ್ಳೆಯ ಶುಭಸಮಾಚಾರ ಶೀಘ್ರದಲ್ಲೇ ನಮಗೆ ತಲುಪಿಸಿ" ಎನ್ನುತ್ತಾ ಮುಗುಳ್ನಕ್ಕರು. ಮೀನಾಳನ್ನು ನೆನೆದು ಋತ್ವಿಕ್ ಕೂಡ ಮುಗುಳ್ನಕ್ಕ. ಪ್ರತಾಪ್, ಮೀನಾಕ್ಷಿ ಹಾಗೂ ಋತ್ವಿಕ್ ವೈದ್ಯರಿಗೆ ಅಭಿನಂದನೆ ತಿಳಿಸಿ ಆಸ್ಪತ್ರೆಯಿಂದ ನೇರವಾಗಿ ಮೀನಾಳ ಮನೆಗೆ ತೆರಳಿದರು.  "ನಿನಗೆ ಹೇಗೆ ಧನ್ಯವಾದ ಹೇಳ್ಬೇಕೋ ಗೊತ್ತಾಗ್ತಾ ಇಲ್ಲ. ನೀನೇ ಕಾರಣ ಋತ್ವಿಕ್ ಗುಣವಾಗುವುದಕ್ಕೆ. ಆಸ್ಪತ್ರೆಯಲ್ಲಿ ಅವನನ್ನು ನೋಡಿದಾಗ ನಮಗಿಬ್ಬರಿಗೂ ದಿಕ್ಕೇ ತೋಚದಂತಾಗಿತ್ತು" ಎಂದರು ಮೀನಾಕ್ಷಿ. "ಆಂಟೀ, ತುಂಬಾ ದೊಡ್ಡ ದೊಡ್ಡ ಮಾತಾಡ್ತಾ ಇದೀರಾ"‌ ಎಂದಳು. ಋತ್ವಿಕ್ ಏನೂ ಹೇಳದೇ ಸುಮ್ಮನೆ ಕೂತಿದ್ದನ್ನು ನೋಡಿ ಮೀನಾ "ನೋಡಿ, ನಿಮ್ಮ ಮಗ ಒಂದು ಬಾರಿ ಕೂಡ ಧನ್ಯವಾದ ತಿಳಿಸಿಲ್ಲ ನನಗೆ" ಎಂದಳು. ಋತ್ವಿಕ್ ಮಾತಿಗೆ ಧನ್ಯವಾದ ಎಂದ. ಅವಳಲ್ಲಿ, ಇವನ ನಿವೇದನೆ ಇನ್ನೊಂದಿತ್ತು. &quo

ಅನುರಾಗ (ಭಾಗ-೩)

ಇಮೇಜ್
 ಕಥೆಯನ್ನು ಮುಂದುವರಿಸುತ್ತಾ... ಆಗ ಪ್ರತಾಪನಿಗೆ ನೆನಪಿಗೆ ಬಂದದ್ದು ಮೀನಾ, ಅವರ ಆತ್ಮೀಯ ‌ಸ್ನೇಹಿತನ ಮಗಳು. ಮನಃಶಾಸ್ತ್ರದಲ್ಲಿ ಎಮ್.ಎಸ್ ಮುಗಿಸಿ, ತನ್ನದೇ ಕ್ಲಿನಿಕ್ ತೆರೆದು ೨-೩ ವರ್ಷಗಳಲ್ಲೇ ಉತ್ತಮ ಸೇವೆಯಿಂದ ಒಳ್ಳೆಯ ಹೆಸರುಗಳಿಸಿದ್ದಳು. ಆದರೆ ಋತ್ವಿಕ್ ‌ಮತ್ತು ಮೀನಾ ಹಾವು ಮುಂಗುಸಿಯಂತಿದ್ದರು. ಒಮ್ಮೆ ಅವಳನ್ನು ಭೇಟಿಯಾಗಿ ಮಾತನಾಡಬೇಕೆಂದು ಮರುದಿನವೇ ತನ್ನ ಸ್ನೇಹಿತನ‌ ಮನೆಗೆ, ಎಲ್ಲವನ್ನೂ ತಿಳಿಸಿ ಮೀನಾಳ ಸಹಾಯವನ್ನು  ಕೇಳಿದರು. ಖುಷಿಯಿಂದಲೇ ಒಪ್ಪಿದ ಮೀನಾ, "ಅಂಕಲ್, ಸಹಾಯ ಎನ್ನುವ ದೊಡ್ಡ ಮಾತನ್ನು ಏಕೆ ಹೇಳ್ತಿದೀರಾ? ಇದು ನನ್ನ ಕರ್ತವ್ಯ, ಅಲ್ಲದೇ, ನಿಮಗಿಲ್ಲ ಎನ್ನಲಾದೀತೇ" ಎಂದಳು.  ಹದಿನೈದು ದಿನಗಳಲ್ಲಿ ಋತ್ವಿಕ್ನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರು. ನಿಧಾನವಾಗಿ ಯಾರದ್ದಾದರೂ ಸಹಾಯದಿಂದ ಅಥವಾ ಅಥವಾ ಕೋಲಿನ ಸಹಾಯದಿಂದ ನಡೆಯಲು ಆರಂಭಿಸಿದ. ಇದರ ಮಧ್ಯೆ ವಾರಕ್ಕೆ ಮೂರು ದಿನಗಳು ಮೀನಾ ಋತ್ವಿಕ್ನ ಮಾನಸಿಕ ಆರೋಗ್ಯವನ್ನು ಪರಿಶೀಲಿಸಿ ಚಿಕಿತ್ಸೆ ನೀಡಲು ಸನಿಹವೇ ಇರುತ್ತಿದ್ದಳು. ಒಂದು ತಿಂಗಳೊಳಗೆ ಆತನ ದೈಹಿಕ ಆರೋಗ್ಯ ತುಂಬಾ ಸುಧಾರಿಸಿತು. ಆದರೆ ವೈದ್ಯರು ಹೇಳಿದಂತೆ, ಋತ್ವಿಕ್ ಡೆಲಿರಿಯಮ್ನಿಂದ ಬಳಲುತ್ತಿದ್ದುದರಿಂದ ಪ್ರತಾಪ್ ಮತ್ತು ಮೀನಾಕ್ಷಿಯವರ ಚಿಂತೆ ಕಡಿಮೆಯಾಗಿರಲಿಲ್ಲ. ಮಗುವಿನಂತೆ ಹಠ, ಅಳು, ಚೀರಾಟ. ಕೆಲವೊಮ್ಮೆ ಮಂಕಾಗಿ ಕುಳಿತಿರುತ್ತಿದ್ದ. ಒಮ್ಮೊಮ್ಮೆ ಹಠಾತ್ತನೆ ಏನನ್ನೋ ನೋಡಿದಂತೆ ಚೀ