ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೊಬೈಲ್ ತಂದಿಟ್ಟ ಫಜೀತಿ

ಇಮೇಜ್
  ಚಿತ್ರ: ಅರುಂಧತಿ  ನಮ್ಮ ದೈನಂದಿನ ಜೀವನದಲ್ಲಿ ಆಗುವ ಅದೆಷ್ಟೋ ಘಟನೆಗಳು ಅಥವಾ ಸಂದರ್ಭಗಳು ಕೆಲವೊಮ್ಮೆ ಚಿಕ್ಕದೆನಿಸಿದರೂ ಅದರ ಪರಿಣಾಮ ಮಾತ್ರ ದೊಡ್ಡದಾಗಿರತ್ತೆ. ಇತ್ತೀಚೆಗೆ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿದೆ. ಈ ಲಾಕ್ಡೌನ್ ನಂತರವಂತೂ ಆಟ, ಪಾಠ, ಹೀಗೆ ಎಲ್ಲಾ ಕಾರ್ಯಕ್ಕೂ ಮೊಬೈಲ್ ಬೇಕು. ಮೊಬೈಲ್ ಎಂದ ತಕ್ಷಣ ನೆನಪಾಯ್ತು.  ಬಿಟ್ಟೆನೆಂದರೂ ಬಿಡದೀ ಮಾಯೆ  ಲೋಕದಲ್ಲಿದೆ ಈ ಮೊಬೈಲ್ನ ಮಾಯೆ ಇದರಿಂದ ಬರುವವು ಕ್ಯಾನ್ಸರ್ನಂತಹ ರೋಗಗಳು ಆದರೂ ಏಕೆ ಮೊಬೈಲ್ನ ಅತಿಯಾದ ಬಯಕೆ? ಸಂದೇಶ ಕಳಿಸಲು ಸಮಯವೊಂದಿಷ್ಟು ಅದರೊಂದಿಗೆ ಹಾಳು ನಮ್ಮ ಆರೋಗ್ಯವಿಷ್ಟು ಅದಕ್ಕೆ ಖರ್ಚು ಹಣವೊಂದಿಷ್ಟು  ಆದರೂ ಬೇಸರವಿಲ್ಲ ಇಷ್ಟಿಷ್ಟು..! ಮೊಬೈಲ್ ಬೇಕು ಅನೇಕ ಲಾಭಗಳಿಗೆ  ತಲೆಬಾಗಬೇಡಿ ಅದರ ಕೆಡುಕುಗಳಿಗೆ ಮಿತಿಯೆಂಬುದಿರಲಿ ಉಪಯೋಗಕ್ಕೆ ಮಿತಿ ಇರದಿರೆ ಜೀವಕ್ಕೆ ಕುತ್ತೇ!! ಮೊಬೈಲ್ ಬಳಕೆಯ ತರಂಗಗಳಿಗೆ  ಪ್ರಾಣವನಿತ್ತವು ಅನೇಕ ಜೀವಿಗಳು ಮೊಬೈಲನ್ನು ನಿಯಂತ್ರಿಸಿ, ಜೀವಿಗಳನ್ನುಳಿಸಿ ಇದೇ ನನ್ನ ಘೋಷಣೆ, ಪ್ರಾರ್ಥನೆ..! ಇದನ್ನು ನಾನೇ ೬-೭ ವರ್ಷಗಳ ಹಿಂದೆ ಬರೆದಿದ್ದು. ಇತ್ತೀಚೆಗೆ ಇದನ್ನ ಓದಿದಾಗೆಲ್ಲಾ ನಮಗಾಗಿಯೇ ಬರೆದಿಟ್ಟಿರುವೆನೇನೋ ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಮೊಬೈಲನ್ನು ನಾವು ಅವಲಂಬಿಸಿದ್ದೇವೆ. ಘಟನೆ, ಸಂದರ್ಭ ಅಂತೆಲ್ಲಾ ಹೇಳಿ, ಈಗ ಮೊಬೈಲ್ ಬಗ್ಗೆ ಹೇಳ್ತಿದಾರಲ್ಲಾ, ಅಂತ ಅಂದ್ಕೊಳ್ಬೇಡಿ. ಇದೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ ಇತ್

ಭಾವನೆಗಳ ಬೆನ್ನೇರಿ....

ಇಮೇಜ್
  ಭಾವನೆಗಳ ಬೆನ್ನೇರಿ..... ಚಿತ್ರ: ವೈಷ್ಣವಿ ಕೆ. .. ಬದಲಾಗೋ ಭಾವನೆಗಳ ಬೆನ್ನೇರಿ ಮರೆತ್ಹೋದೆ ಕ್ರಮಿಸಿದೆ ದಾರಿ.. ಸರಿತಪ್ಪಿನ ಗೊಂದಲಗಳ ಮೀರಿ ಭರವಸೆಯ ಸ್ವಪ್ನಕೆ ನಾ ಆಭಾರಿ.. ಕಾರ್ಮುಗಿಲ ಕತ್ತಲು ಜಾರಿ ಮನದೊಳಗೆ ಬೆಳಕೊಂದು ಬೀರಿ ಹಳೆನೆನಪುಗಳ ಮರೆವಿಗೆ ತೂರಿ ಸೆಳೆಯುತಿದೆ ತನ್ನೆಡೆ ಕವಲುದಾರಿ... ಮತ್ತದೇ ಪ್ರಶ್ನೆಗಳ ಹಾಜರಿ.. ಭಾವುಕಳೇ ನಾನು ಈ ಪರಿ..! ಮನವಾಗಿದೆ ತಿರುಗೋ ಬುಗುರಿ ನಾ ಹೊರಟೆ ಭಾವನೆಗಳ ಬೆನ್ನೇರಿ....

ಕಂಗ್ಲೀಷ್ ಕಥೆ- ಕ್ರಷ್

ಇಮೇಜ್
  ಒಂಟಿ ಆಗಿರೋ ಬಾಳಲ್ಲಿ ಕ್ರಷ್ ಅನ್ನೋ ಪದ ಎಷ್ಟು ಖುಷಿ ಕೊಡುತ್ತೆ ಅಲ್ವಾ! ಶಾಲೇಲಿ, ಕಾಲೇಜಲ್ಲಿ, ಕೆಲಸದಲ್ಲಿ ಆಗಾಗ ನಮ್ ಜೀವನದಲ್ಲಿ ಎಂಟ್ರಿ ಕೊಡ್ತಾನೆ ಇರ್ತಾರೆ. ಹೈಸ್ಕೂಲಲ್ಲೂ ಒಬ್ಳು ಇದ್ಲು. ಅಂದವಾದ ಮುಖ, ಎರಡು ಜಡೆ, ಕಣ್ಣಿಗೆ ಕಾಡಿಗೆ, ಹಣೇಲಿ ಹೊಳೆಯೋ ಒಂದು ಚಿಕ್ಕ ಬಿಂದಿ, ಕಾಲಿಗೆ ದಪ್ಪದ ಗೆಜ್ಜೆ, ಕೈಗೆ ಒಂದೊಂದ್ ಬಳೆ, ಫಸ್ಟ್ ಬೆಂಚು, ಅಧ್ಯಾಪಕರ ಮೆಚ್ಚುಗೆಯ ಹುಡುಗಿ ಅಂದ್ರೆ ಕ್ಲಾಸಿಗೆ ಫಸ್ಟ್. ಅವಳಿಗೆ ಆಗ್ಲೇ ಸ್ವಲ್ಪ ಸೊಕ್ಕಿತ್ತು. ನನ್ ಹೆಸರು ಯಾವಾಗ್ಲೂ ಬೋರ್ಡ್ ಮೇಲೆ ಇರ್ತಿತ್ತು. ನಾವ್ ಬಿಡಿ, ಲಾಸ್ಟ್  ಅವಳಿಂದ ಅಧ್ಯಾಪಕರ ಹತ್ರ ಬೈಸ್ಕೊಂಡಿದ್ದು ಒಂದೆರಡ್ ಸಲ ಏನಲ್ಲ. ಆದ್ರೂ ಅವಳಂದ್ರೆ ನಂಗಿಷ್ಟ. ಅವಳನ್ನ ನೋಡೋ ಖುಷಿ, ಅವ್ಳು ಕ್ಲಾಸಿಗೆ ಬರದೇ‌ ಇದ್ದಾಗ ಆಗೋ ಬೇಜಾರು‌ ನಂಗೇ‌ ಗೊತ್ತು. ಹೈಸ್ಕೂಲ್ ಮುಗಿದ ಬಳಿಕ ಅವಳ ಮನೆಯವರು ಬೇರೆ ಊರಿಗೆ ಹೋದ್ರು. ಇತ್ತೀಚೆಗೆ ಅವಳ ನೆನಪಾಗಿ ಫೇಸ್ಬುಕ್ನಲ್ಲಿ ನೋಡಿದಾಗ, ಅವ್ಳಿಗೆ ಮದ್ವೆ ಆಗಿದ್ದೂ‌ ಗೊತ್ತಾಯ್ತು. ಆಗೆಲ್ಲಾ‌ ಅವಳು ಇಷ್ಟ, ಕ್ರಷ್ ಅಂತ ಕರೆಯೋ ಧೈರ್ಯ ‌ನಂಗಂತೂ ಇರ್ಲಿಲ್ಲ. ಈಗ ಅನ್ಸುತ್ತೆ, ಅದೇ ಕ್ರಷ್ ಅಂತ. ಅದ್ರ ಮೇಲೆ ಆ ಥರಾ ಯಾರೂ ಇಷ್ಟ ಆಗಿರ್ಲಿಲ್ಲ. ಮೆಕಾನಿಕಲ್ ಎಂಜಿನಿಯರಿಂಗ್ ಓದಿದ್ದು, ಒಬ್ಬ ಹುಡ್ಗೀನು ನಮ್ ಕ್ಲಾಸ್ನಲ್ಲಿ ಇರ್ಲಿಲ್ಲ. ಓದಿ, ಕೆಲಸ ಸಿಕ್ಕಿ ಎರಡ್ ವರ್ಷ ಆಗ್ತಾ ಬಂದಿತ್ತು.  ಜೀವನ ಅಂದ್ರೆ, ಅಮ್ಮ, ಮನೆ, ಕೆಲಸ, ಅಣ್ಣ-ಅತ್ತಿಗೆ, ನನ್ನ ಹಾ

ಸಾವಿತ್ರಿಬಾಯಿ ಫುಲೆ

        ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ, ಸಂಚಾಲಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ, ಅನನ್ಯ ಸಾಧಕಿಯಾಗಿ, "ಎಲೆ ಮರೆಯ ಕಾಯಿಯಂತೆ" ಇದ್ದು, ಮರೆಯಾದವರು ಸಾವಿತ್ರಿಬಾಯಿಫುಲೆಯವರು. ಅವರ ಬದುಕೇ ಸಂದೇಶ. ಅವರ ಕೊಡುಗೆಗಳು ಅಪಾರ.         ಜನವರಿ ೩, ೧೮೩೧ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಂನ್ನಲ್ಲಿ, ನೇವಸೆ ಪಾಟೀಲರ ಮಗಳಾಗಿ ಜನಿಸಿದರು. ತಮ್ಮ ೯ನೇ ವರ್ಷದಲ್ಲೇ ಆ ಕಾಲದ ಕಟ್ಟುಪಾಡುಗಳಿಗೆ ಒಳಗಾಗಿ, ಸಾಮಾಜಿಕ ಸುಧಾರಕರಾದ ಜ್ಯೋತಿ ಬಾ ಫುಲೆಯನ್ನು ವಿವಾಹವಾದರು. ಇದೇ ಅವರ ಬದುಕಿನ ಮಹತ್ತರ ತಿರುವು. "ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ" ಎಂಬುದಕ್ಕೆ ಸಾವಿತ್ರಿಬಾಯಿ ಫುಲೆಯವರೇ ಸಾಕ್ಷಿ. ತನ್ನ ಪತಿಯ ಎಲ್ಲಾ ಕೆಲಸಗಳಲ್ಲೂ ಸಹಕರಿಸುತ್ತಾ, ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದು, ಪತಿಯ ಕೀರ್ತಿಗೆ ಕಲಶವಾಗಿದ್ದವರು. 'ಬ್ರಿಟಿಷರ ಶಿಕ್ಷಣ ನೀತಿ'ಯಿಂದ ಪ್ರೇರಣೆ ಹೊಂದಿದ ಜ್ಯೋತಿ ಬಾ ಫುಲೆಯವರು, ತಮ್ಮ ಪತ್ನಿಗೂ ಶಿಕ್ಷಣವನ್ನು ಕಲಿಸತೊಡಗಿದರು. ಆದ್ದರಿಂದ ಸಾವಿತ್ರಿಬಾಯಿಯವರಿಗೆ "ಮನೆಯೇ ಮೊದಲ ಪಾಠ ಶಾಲೆ" ಆಯಿತು. ೧೮೪೭ರಲ್ಲಿ ಶ್ರೀಮತಿ ಮಿಚಲ್ರವರ ನಾರ್ಮಲ್ ಸ್ಕೂಲಿನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದ ಅವರಿಗೆ, ಅಂದಿನ ಕಾಲದಲ್ಲಿ ಶಿಕ್ಷಣ ಪಡೆದ 'ಮೊದಲ ಮಹಿಳೆ' ಎನ್ನುವ ಪ್ರಸಿದ್ಧಿ ದೊರಕಿತು. ೧೭ನೇ ವಯಸ್ಸಿನಲ್