ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಂಬ್ಳಿಹುಳದ ಪುರಾಣ

  ಕಾಲ್ಪನಿಕ ಅಲ್ಲ.. ' ಅನುಭವ ಕಥನ '.. ಕಂಬ್ಳಿಹುಳದ್ಬಗ್ಗೆ ಗೊತ್ತಿರೋರ್ಗೆ ಮಾತ್ರ...! ನಾನು ಕುಂದಾಪುರದಿಂದ ಹೊರ್ಟು, ಕೋಟದಲ್ಲಿ ಬಸ್ ಇಂದ ಇಳ್ದೆ. ನಾನು, ಅಮ್ಮ, ಚಿಕ್ಕಮ್ಮ, ಅತ್ತೆ ಎಲ್ಲ ಒಟ್ಟಾಗಿ ಫಂಕ್ಷನ್ಗೆ ಹೋಗ್ಬೇಕಾಗಿರೋದ್ರಿಂದ ನಾನು ಕೋಟ ಬಸ್ ಸ್ಟ್ಯಾಂಡ್ ಅಲ್ಲಿ ಕಾಯ್ಬೇಕಾಯ್ತು. ತುಂಬಾ ಬಿಸ್ಲು ಇರೋದ್ರಿಂದ ಬ‌ಸ್ ಸ್ಟ್ಯಾಂಡ್ ಅಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡೆ. ಕೂತ್ಕೊಂಡ್ ಕೂಡ್ಲೇ ಅಲ್ಲೇ ನಿಂತಿರೋ ಒಬ್ರು "ಪುಟ್ಟಿ, ಅಲ್ಲಿ ಕೂತ್ಕೋಬೇಡ, ಕಂಬ್ಳಿ ಹುಳ ಇದೆ" ಅಂತ ಹೇಳಿ ಹೋದ್ರು. 'ಓಹ್! ಹೌದಾ' ಅಂತ‌ ಹೇಳಿ, ಇಲ್ಲೇ ಎಲ್ಲೋ ಇದ್ಯೇನೋ ಅನ್ಕೊಂಡು, ನೋಡ್ಲಿಕ್ಕೂ ಹೋಗ್ದೆ, ಅಲ್ಲಿಂದ ಎದ್ದು ಬಂದು ನಿತ್ಕೊಂಡೆ. ಅಷ್ಟ್ರಲ್ಲೇ ಅಲ್ಲೇ ಇರೋ ಗೂಡಾ ಅಂಗ್ಡಿಯೋರು, "ಪುಟ್ಟ, ಪ್ಯಾಂಟ್ ಮೇಲೆ ಕಂಬ್ಳಿ ಹುಳ ಇದೆ ನೋಡು" ಅಂದ್ರು. ಅವ್ರು ಹೇಳಿದ್ದೇ ತಡ, ಎದ್ನೋ ಬಿದ್ನೋ ಅಂತ ಪ್ಯಾಂಟ್ ಕೊಡ್ಕೋಕೆ ಸ್ಟಾರ್ಟ್ ಮಾಡಿದೆ. ಅಂತೂ ಕಂಬ್ಳಿಹುಳ ಕೆಳಗ್ ಬಿತ್ತು. ಈ ರಗ್ಳೆ ಬೇಡ ಅಂತ ಅಲ್ಲಿಂದಾಚೆ ಬಂದು ಬಿಸ್ಲಲ್ಲಿ ನಿಂತ್ಕೊಂಡೆ. ಬಸ್ ಸ್ಟ್ಯಾಂಡ್ ನೋಡ್ತೀನಿ, ಪುಟ್ ಪುಟ್ಟ ಕಂಬ್ಳಿಹುಳಗಳು. 1-2 ಅಲ್ಲಾ ರೀ.. ಬಸ್ ಸ್ಟ್ಯಾಂಡ್ ತುಂಬಾ! ಚಿಕ್ದಾಗಿ, ಬಿಳಿಯಾಗಿ ಇರೋದ್ರಿಂದ ಕೂಡ್ಲೇ ಕಣ್ಣಿಗೆ ಕಾಣ್ಸೋದು ಇಲ್ಲ! (ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಕೊಂಡ್ ಬಂದಿದ್ದು ಸಾರ್ಥಕ ಆಯ್ತು ಅನ್ಸಿದ್ದು ಮಾತ್ರ ಸುಳ್ಳ

ಮರೆಯಾದೆಯಾ ಪುಟ್ಟ ಮರಿ....?!

ಇಮೇಜ್
  ಹೆದರಿ ಕೋಣೆಯೊಳಗಿರುತ್ತಿದ್ದ ಪುಟ್ಟ ಮರಿ ನೀನಾಗ ಅದ ನೋಡಿ ಹೊರತಂದು ನಾ ಆಟವಾಡಿಸಿದಾಗ ಕೀಟಲೆ ಮಾಡಿ ಸಂತಸಗೊಳಿಸಿದ ನೀ ಇಂದು ಮರೆಯಾದೆಯಾ..? ಎಲ್ಲರೂ ನಿನ್ನ ಅಂದಕ್ಕೆ ಮಾರುಹೋದಾಗ ಎತ್ತಿ ಆಟವಾಡಿಸಲು ಆರಂಭಿಸಿದರಾಗ ಅಷ್ಟು ಚಂದದಿಂದಿದ್ದ ನೀ ಇಂದು ಕಾಣದಾದೆಯಾ..? ನಾ ಬೇಸರದಲ್ಲಿ ಕುಳಿತಿರುವಾಗ ಸಮಾಧಾನಪಡಿಸುವಂತೆ ನೀ ಬಂದಾಗ ಮುದ್ದು ಮಾಡಿ ಬೇಸರ ಮರೆಸಿದ ನೀ ಇಂದು ನನ್ನ ಅಗಲಿದೆಯಾ..? ಕೀಟಲೆ ಮಾಡಿ ಸಂತಸಗೊಳಿಸುವವರಾರೀಗ? ಒಂಟಿಯಾದಾಗ ಮುದ್ದು ಮಾಡುವವರಾರೀಗ? ಸದಾ ಅಮ್ಮನೊಂದಿಗಿರುತ್ತಿದ್ದ ಮುದ್ದಾದ ಬೆಕ್ಕು ನೀ ನಿನ್ನ ಮೂಕವೇದನೆಯ ಅರಿಯದೆ ಹೋದೆನಾ..?...

ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ, ಓನ್ಲೀ ಲವ್ - ನೋ ಡವ್

ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ ಆರು ಕೋಟಿ ಜನರ ಕನಸೊಂದು ಚಿಗುರುತಿದೆ. ಹತಾಶೆಯ ಕಾರ್ಮೋಡ ಮಂಜಿನಂತೆ ಕರಗುತ್ತಿದೆ. ಕೆಚ್ಚೆದೆಯ ಕಲಿಗಳು ಆಡುತಿರೆ ಅಂಗಳದಲ್ಲಿ. ಉತ್ಸಾಹದ ಕಿರಣಗಳು ಹೊರಹೊಮ್ಮುತ್ತಿದೆ ಕನ್ನಡಿಗರಲ್ಲಿ. ಏನೇ ಇರಲಿ, ಏನೇ ಬರಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಆಗಲಿ. ಈ ಸಲವಾದರೂ.. ಐ. ಪಿ. ಎಲ್ ಕಪ್ಪು ನಮ್ಮದಾಗಲಿ. ಹಾಗೆ ಭಕ್ತಿಯಿಂದ ಹೇಳಿ ಜೈ ಆರ್.ಸಿ.ಬಿ. Only ಲವ್ , ನೋ dove ಐ.ಲವ್.ಯು ಎಂದು ಹೇಳಿದರೂ ನೀ ತಿರುಗಿ ನೋಡಲಿಲ್ಲವೇ ಓ ನನ್ನ ನಲ್ಲೆ. ಕೇಳಿಸಿಯೂ ನಿನಗೆ ಕೇಳಿಸಿಲ್ಲವಂತೆ ನಟಿಸುವೆ ಎಂದು ನಾನು ಬಲ್ಲೆ. ಸಮರ್ಪಿಸುವೆ ನನ್ನೆಲ್ಲಾ ಭಾವನೆಗಳು, ಮನಸ್ಸನ್ನು ನಿನ್ನಲ್ಲೇ. ನೀನು ಒಪ್ಪಿದರೆ ನಿನ್ನ ಪಿತನೊಡನೆ ಮಾತಾಡುವೆ ಈಗಲೇ. ಪ್ರೀತಿಯ ನಿವೇದನೆಯನ್ನು ಉಣಬಡಿಸುವೆ ನಾನಿಂದು. ಸವಿದು ಸಂತೃಪ್ತಳಾಗು ಓ ನನ್ನ ದೇವತೆ. ನಿನ್ನಯ ಪ್ರತ್ಯುತ್ತರಕ್ಕೆ ಕಾಯುತಿದೆ ನನ್ನ ಹೃದಯ. ಕನಸಿನಲ್ಲೂ ಬಂದು ನನ್ನ ಹೃದಯವನ್ನು ಬಡಿದೆಯಾ...ಬಡಿದೆಯಾ…ಬಡಿದೆಯಾ. - ಶ್ರೀನಿಧಿ ಮಧ್ಯಸ್ಥ ಕಾರ್ಕಡ  ಸಾಹಿತ್ಯ ಪ್ರಪಂಚಕ್ಕೆ ಪುಟ್ಟ, ಮೊದಲ ಹೆಜ್ಜೆ ಇಟ್ಟಿರುವ ನಮ್ಮ ಸಹೋದರನಿಗೆ ಅಭಿನಂದನೆಗಳನ್ನು ತಿಳಿಸುತ್ತ, ಇದೊಂದು ಅವನ ಬೆನ್ನು ತಟ್ಟುವ ಪ್ರಯತ್ನ... 

ನಿನ್ನ ನೆನಪಿನಲಿ...

ಇಮೇಜ್
  ಮಿಟುಕುವ ಕಣ್ರೆಪ್ಪೆಗಳಲಿ ಅದರುವ ಅಧರಗಳಲಿ ನಿಮಿರುವ ಕರ್ಣಗಳಲಿ ಅಕ್ಕರೆಯ ನುಡಿಗಳಲಿ ಸ್ಪರ್ಶದ ಹಿತಭಾವದಲಿ ಬೆಚ್ಚನೆಯ ಅಪ್ಪುಗೆಯಲಿ ಮನದ ಉಲ್ಲಾಸದಲಿ ಮಮತೆಯ ಮಡುವಿನಲಿ ನಿನ್ನ ನೆನಪಿನಲಿ ನನ್ನನ್ನೇ ಮರೆತಿರುವೆನಿಲ್ಲಿ...