ಪೋಸ್ಟ್‌ಗಳು

ಅರೆರೆರೆ ಗಿಣಿರಾಮ!

ಇಮೇಜ್
  ಅರೆರೆರೆ ಗಿಣಿರಾಮ! ಅರೆರೆರೆ ಗಿಣಿರಾಮ!... ಇದು ನಮ್ಮ ಮನೆಯ ಪೇರಳೆ ಮರದಲ್ಲಿನ ಕಾಯಿ, ಹಣ್ಣುಗಳನ್ನು ತಿನ್ನಲು ಗಿಳಿಗಳು ಬಂದಾಗಲೆಲ್ಲಾ ನಾನು ಗುನುಗೋ ಹಾಡು. ೩-೪ ಪ್ರಭೇದದ ಗಿಳಿಗಳು ಬರುತ್ತಾವಾದರೂ, ನನ್ನನ್ನು ಆಕರ್ಷಿಸಿದ್ದು ಚಿಟ್ಟು ಗಿಳಿ. ಇದನ್ನು ಚುಟ್ಟು ಗಿಳಿ,‌ ನೇತಾಡುವ ಗಿಳಿ ಎಂದೂ, ಆಂಗ್ಲ ಭಾಷೆಯಲ್ಲಿ ಲೋರಿಕೀಟ್, ವರ್ನಲ್ ಹ್ಯಾಂಗಿಂಗ್ ಪ್ಯಾರಟ್ ಎಂದೂ ಕರೆಯುತ್ತಾರೆ. ಪ್ರತಿಬಾರಿ ಮಳೆಗಾಲದಲ್ಲಿ ತಪ್ಪದೇ ಹಾಜರಾಗುವ ಈ ಗಿಳಿಗಳು, ತಮ್ಮ ಬಣ್ಣ, ಗಾತ್ರ, ವರ್ತನೆಯಿಂದಲೇ ಮನಸೋಲಿಸಬಲ್ಲವು. ಹೆಚ್ಚೆಂದರೆ ೫-೬ ಇಂಚು ಉದ್ದ, ಚಿಕ್ಕ ಬಾಲ, ಸುಂದರ ಕಣ್ಣುಗಳು, ಹಸಿರು ಬಣ್ಣದ ದೇಹ, ಕಿತ್ತಳೆ ಬಣ್ಣದ ಕೊಕ್ಕು, ಕೆಂಬಣ್ಣದ ಹಿಂಭಾಗ ಇವು ಈ ಚಿಟ್ಟು ಗಿಳಿಯ ಸಾಮಾನ್ಯ ಲಕ್ಷಣಗಳು. ಬಾವಲಿಯಂತೆ ತಲೆಕೆಳಗಾಗಿ ಮಲಗುವ, ಕೆಲವೊಮ್ಮೆ ತಲೆಕೆಳಗಾಗಿ ಕುಳಿತುಕೊಳ್ಳುವ ಹಾಗೂ ಆಹಾರ ಸೇವಿಸುವ ಕಾರಣದಿಂದಲೇ ಇವು ಇತರ ಗಿಳಿಗಳಿಗಿಂತ ಭಿನ್ನ ಮತ್ತು ನೇತಾಡುವ ಗಿಳಿ ಎಂದು ಕರೆಯಲ್ಪಡುವುದು. ಚಿಟ್ಟು ಗಿಳಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಷ್ಟದ ಕೆಲಸವೇ.. ಕಾರಣ, ಇವುಗಳ ಚುರುಕಾದ ಹಾರಾಟ. ಎಲೆಹಸಿರ ಬಣ್ಣದವುಗಳೇ ಆಗಿರುವುದರಿಂದ, ಈ ಗಿಳಿಗಳನ್ನು ಎಲೆಗಳ ಮಧ್ಯೆ ಹುಡುಕುವುದೂ ಒಂತರಹದ ಸೋಜಿಗದಾಟ. ಸಣ್ಣಗೆ ಮಳೆ ಹನಿಯುತ್ತಿರುವಾಗ, ಇವುಗಳು ಕೊಂಬೆಯಿಂದ ಕೊಂಬೆಗೆ ಹಾರಿ, ಆಹಾರ ಹುಡುಕುವ ಬಗೆ, ಆಹಾರ ಸಿಕ್ಕಿದೊಡನೆ ಅತ್ತಿತ್ತ ನೋಡಿಕೊಂಡು ...

'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

ಇಮೇಜ್
 ' ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಗಂಡುಕಲೆಯೆಂದೇ ಖ್ಯಾತವಾಗಿರುವ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ. ಈ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ತಾರೆಗಳೊಂದಿಗೆ, ಪ್ರಸ್ತುತ ರಂಗವನ್ನಾಳುತ್ತಿರುವ ದಿಗ್ಗಜರು ಹಲವರು. ಅವರಲ್ಲೊಬ್ಬರು ಬಡಗಿನ ಪ್ರಧಾನ ವೇಷಧಾರಿ, 'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ೧೪/೦೭/೧೯೮೫ರಲ್ಲಿ ಗಂಗಾಧರ ಶೆಟ್ಟಿಗಾರ್, ಸುಲೋಚನ ದಂಪತಿಗಳ ಮಗನಾಗಿ ಉಡುಪಿಯಲ್ಲಿ ಜನಿಸಿದ ಇವರು, ಬೆಳೆದಿದ್ದೆಲ್ಲಾ ಮಂದಾರ್ತಿಯಲ್ಲಿ. ತಂದೆ ವಿದೇಶದಲ್ಲಿದ್ದ ಕಾರಣ, ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ತಾಯಿಮನೆ ಮಂದಾರ್ತಿಗೆ ಆಗಮಿಸಿ, ಸೋದರಮಾವನ ಆಸರೆಯಲ್ಲಿ, ತಾಯಿ-ತಮ್ಮ-ತಂಗಿಯೊಂದಿಗೆ ಬಾಡಿಗೆಮನೆಯಲ್ಲಿ ವಾಸಿಸಿದರು. ಬಾಲ್ಯದಲ್ಲಿ, ಅತಿಯಾದ ಶಿಸ್ತಿನ ಮಾವನೆಂದರೆ ಭಯ. ಅವರೆದುರು ನಿಲ್ಲಲೂ ಹೆದರುತ್ತಿದ್ದುದಲ್ಲದೆ, ಎದುರಾದಾಗ ಸೀದಾ ಕೋಣೆಯೊಳಗೆ ಓಡಿ ಅಡಗಿಕೊಳ್ಳುತ್ತಿದ್ದರಂತೆ. ಮಂದಾರ್ತಿಗೆ ಬಂದ ಮೇಲೆ ಈ ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನ. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, "ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ" ಎಂದು. ಏಳನೇ ತರಗತಿಯಲ್ಲಿಯೇ ವೇಷ ಹಾಕಲು ಆರಂಭಿಸಿದ್ದ ಇವರಿಗೆ ಮೊದಲ ಗುರು ಮಕ್ಕಳ ಮೇಳ ತಂತ್ರಾಡಿಯ ಹಿರಿಯಣ್ಣ ...

ಹಾಗೇ ಸುಮ್ಮನೆ - ೨ (ಕಿರುಚಿತ್ರ)

ಇಮೇಜ್
ತಿಳಿನೀಲಿ ಆಗಸದ ಕಿರುಚಿತ್ರವಿದೆಯಂತೆ, ನಲುನಗೆಯ ಬೀರುತ, ಇಕೋ ಬಂದು ನೋಡು! ಮರೆಯಾದ ಚಂದಿರನ ವಿರಹಗೀತೆಯು ಇರಲು, ವರನಂತೆ ಸಿಂಗರಿಪ ರವಿಯ ಯುಗಳಗೀತೆಯು ಇರಲು, ಬೇಸರವ ಬದಿಗಿರಿಸಿ, ಇಕೋ ಬಂದು ನೋಡು! ಪುಷ್ಪಗಳಲಿ ಮುಡಿಕಟ್ಟಿ, ಕಡುಹಸಿರ ಸೀರೆ ಹೊದ್ದು, ವಧುವಂತೆ ಸಿಂಗರಿಪ ನಾಜೂಕು ನಡುವಿನ, ಝರಿಯಾದ ಭುವಿಯ ಇಕೋ ಬಂದು ನೋಡು!

ಹಾಗೇ ಸುಮ್ಮನೆ - ೧ (ನಗು)

ಇಮೇಜ್
ಎದುರಿನ ನಗುವೊಂದು! ನಾಲ್ಕು ಗೋಡೆಗಳ ನಡುವೆ ಅದು ಮಿಳಿತ ಬಗೆ ನೂರೊಂದು! ಕಂಗಳ ಕೊಳದಿಂದಿಳಿದು, ನಲುಗೆನ್ನೆಯ ಸವರಿ, ಕೆಂಪಿಟ್ಟು ತುಟಿಯ ಅಂಚಲಿ ಕುಳಿತು, ಕುಣಿಯುವ ಪರಿ ಬೇರೊಂದು! ಮನದ ಕಾರ್ಮುಗಿಲ ಸರಿಸಿ, ತಿಳಿ ಮನದ ತೆಳು ಮುಗಿಲು ನಗುವ ಮಳೆಯಾಗಿ ತಂಪಿರಿಸೋ ಬಗೆ ಮತ್ತೊಂದು!

ಮಿಯಾಂವ್ ಕತೆ

ಇಮೇಜ್
ಈ ಮನುಷ್ಯ ಎಂಬ ಪ್ರಾಣಿ ಮಾಡುವ ಅನಾಹುತ ಒಂದೋ ಎರಡೋ! ನಾವು ಹುಲಿ, ಚಿರತೆಗಳಂತೆ ಮೊದಲು ಕಾಡು ಪ್ರಾಣಿಗಳೇ. ಈ ಮಾನವ ಅವನ ಖುಷಿಗಾಗಿ , ಅವನಿಗೆ ಆಗುವ ಇಲಿಗಳ ಕಾಟದಿಂದ ಮುಕ್ತನಾಗಲು ನಮ್ಮನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದ. ನಿಮಗೆ ಗೊತ್ತಿರಬೇಕಲ್ಲ, ಹುಲಿಗೆ ವಿದ್ಯೆ ಕಲಿಸಿದ್ದು ನಮ್ಮ ಪೂರ್ವಜರೇ! ಎಲ್ಲವೂ ಹಳೆಯ ಕಥೆ ಬಿಡಿ.. ನಿಮಗೆ ನಾ ಯಾರೆಂದು ಗೊತ್ತಾಗಿರಬೇಕಲ್ಲ, ಹೌದು ನಿಮ್ಮ ಯೋಚನೆ ಸರಿಯೇ! ನಾನು ಮಿಯಾಂವ್ ಅಂದ್ರೆ ಬೆಕ್ಕು. ನಾನು ನಮ್ಮಮ್ಮನಿಗೆ ಒಬ್ಬನೇ ಮುದ್ದಿನ ಮಗ. ನಮ್ಮನ್ನು ಸಾಕಿದವರ ಅಲ್ಲ ಅಲ್ಲ, ನಮ್ಮ ಸೇವೆ ಮಾಡುವವರ ಮನೆಯಲ್ಲಿ ನನ್ನ ಹಾಗೆ ಇನ್ನೂ ಅನೇಕರಿದ್ದಾರೆ. ನನ್ನ ಅಮ್ಮ, ಅಜ್ಜಿ, ಚಿಕ್ಕಮ್ಮನ ಮಕ್ಕಳು, ಅಕ್ಕ ಹೀಗೆ.. ನಾನೇ ಕೊನೆಯವ, ಸ್ವಲ್ಪ ಮುದ್ದು ಜಾಸ್ತಿಯೇ. ನಮ್ಮನ್ನು ಸಾಕಿದವರು ಮೀನು-ಮಾಂಸ ತಿನ್ನುವವರಲ್ಲ. ಆದರೆ ನಮಗೆ ಅನ್ನ ಸೇರುವುದಿಲ್ಲ. ನಮಗಾಗಿ ಅದೆಲ್ಲಿಂದಲೋ ಒಣ ಆಹಾರ, ಬಿಸ್ಕೇಟ್ ಎಲ್ಲಾ ತರಿಸುತ್ತಾರೆ. ಅದನ್ನೆಲ್ಲ ತಿಂದು, ಹಾಲು ಕುಡಿದು ನನ್ನ ಕುಟುಂಬದವರು ಹಾಯಾಗಿ, ಖುಷಿಯಾಗಿ ಇರುತ್ತಾರೆ. ಆದರೆ ನಾನು ಹಾಗಲ್ಲ! ನನಗೆ ಪೂರ್ವಜರ ಬೇಟೆಯ ವಿಷಯ ಚೆನ್ನಾಗಿ ಗೊತ್ತು. ನಾನೂ ದೊಡ್ಡ ಬೇಟೆಗಾರನಾಗಬೇಕೆಂಬ ಆಸೆ ನನಗೆ! ಆ ಕಾಡಿನಲ್ಲಿರುವ ಹುಲಿ, ಚಿರತೆ, ಸಿಂಹಗಳನ್ನು ಮೀರಿಸುವ ಛಲ ನನಗೆ. ಆದರೆ ಈ ಮನುಷ್ಯರು..! ಎಲ್ಲಿ ಬಿಡುತ್ತಾರೆ., ಸ್ವಾರ್ಥಿಗಳವರು! ಅವರಿಗೆ ಮುದ್ದು ಮಾಡಲು ನಾವೂ...

ಲಕ್ಕಿ- ಮುದ್ದು ಬೆಕ್ಕು

ಇಮೇಜ್
  ಲಕ್ಕಿ- ಮುದ್ದು ಬೆಕ್ಕು ನಮ್ಮ ಮನೆಯಲ್ಲಿ ೫ ಬೆಕ್ಕುಗಳಿದ್ದವು. ಅದರಲ್ಲಿ ನಮ್ಮ ಚುಕ್ಕಿ ಹೊಟ್ಟೆ ಯಾವಾಗ ದೊಡ್ಡದಾಯ್ತೋ ಆಗಿಂದ, ಅವಳು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ನಾ ಹೇಳುತ್ತಿದ್ದದ್ದು ಒಂದೇ, "ಚುಕ್ಕಿ ಪ್ಲೀಸ್, ಒಂದೇ ಗಂಡು ಮರಿ ಹಾಕು" ಅಂತ. ಅದನ್ನು ಕೇಳಿ ಕೇಳಿ, ಅಸ್ತುದೇವತೆಗಳು ಅಸ್ತು ಅಂದಿದ್ದರೋ, ಅದೇನು ಕಾಕತಾಳೀಯವೋ, ನಮ್ಮ ಚುಕ್ಕಿ ಏಕೈಕ ಸುಪುತ್ರನನ್ನು ಹಡೆದಿದ್ದಳು. ಹುಟ್ಟಿದ ದಿನಾಂಕವೂ ವಿಶೇಷವಾಗಿಯೇ ಇತ್ತು. ಏಂಜೆಲ್ ನಂಬರ್ ಅಂತೀವಲ್ಲ, ಅದರಂತೆ ೪-೪-೨೦೨೪!! ಒಂದೇ ಮಗ ಹುಟ್ಟಿದ್ದಕ್ಕೋ, ಈ‌ ಏಂಜೆಲ್ ನಂಬರ್ ಕಾರಣಕ್ಕೋ , ಹುಡುಕಿ ಹುಡುಕಿ ಕೊನೆಗೆ "ಲಕ್ಕಿ" ಅಂತ ಹೆಸರಿಟ್ವಿ. ಅವನು ಪ್ರೀತಿ ಎಂಬ 'ಲಕ್'ಅನ್ನೇ ಹೊತ್ತು ತಂದಿದ್ದ. ನಮ್ಮ ಮನೆಯಲ್ಲಿ ನಾನು, ಅಕ್ಕ, ಅಮ್ಮ ಬೆಕ್ಕನ್ನು ಮನುಷ್ಯರ ಹಾಗೆ ಪಾಲಿಸಿದರೆ, ಅಪ್ಪ ಮಾತ್ರ ಬೆಕ್ಕನ್ನು ಬೆಕ್ಕಿನ ಹಾಗೇ ನೋಡುವವರು. ಮಾತುಕಥೆ ಏನಿದ್ದರೂ ಎಲ್ಲಾ ದೂರದಲ್ಲೇ! ಬೆಕ್ಕು ಮೈಮೇಲೆ ಕುಳಿತುಕೊಳ್ಳುವುದು/ಮಲಗುವುದು ಇದೆಲ್ಲಾ ಅವರಿಗೆ ಆಗದು. ಆದ್ದರಿಂದ ನಮ್ಮಲ್ಲಿರುವ ಬೆಕ್ಕುಗಳೂ ಅವರ ಬಳಿ ಹೋಗುವುದು ಕಡಿಮೆ. ಆದರೆ ಈ ಲಕ್ಕಿ, ಚಿಕ್ಕ ಮರಿಯಾಗಿದ್ದಾಗಲೇ ಅವರ ಮೈಮೇಲೆ ಹೋಗಿ ಕುಳಿತು ಇತಿಹಾಸವನ್ನೇ ಸೃಷ್ಟಿಸಿದ್ದ! ಅವನು ಮಾತ್ರ ನಮ್ಮ ಬಳಿ ಹೇಗೋ ಅಪ್ಪನ ಬಳಿಯೂ ಹಾಗೇ ವರ್ತಿಸುವುದು. ಅವನಿಗೆ ಆಹಾರ ಬೇಕೆಂದೊಡನೆ ಮನೆಯ ಯಜಮಾನನಾದರ...

ಬುಲ್ ಬುಲ್ ಮಾತಾಡಕಿಲ್ವಾ...?

ಇಮೇಜ್
ಬುಲ್ ಬುಲ್ ಮಾತಾಡಕಿಲ್ವಾ...? ಬುಲ್ ಬುಲ್ ಮಾತಾಡಕಿಲ್ವಾ...? ನಮ್ಮ ಮನೆಗೆ ಬರುವ ಬುಲ್ ಬುಲ್ಗಳು ಮಾತನಾಡುತ್ತವೆಂದರೆ ನೀವು ನಂಬಲೇಬೇಕು. ಬೆಳಗಾದೊಡನೆ ಬಂದು ಆಹಾರಕ್ಕಾಗಿ ಚಿಲಿಪಿಲಿಗುಟ್ಟುವ, ಆಹಾರವೋ-ನೀರೋ ಖಾಲಿಯಾದೊಡನೆ ಬಾವಿದಂಡೆಯ ಮೇಲೆ, ಅಡುಗೆಮನೆ ಕಿಟಕಿಯ ಬಳಿ ಬಂದು ಕರೆಯುವ, ಆ ಕರೆಗೂ ಓಗೊಡದಿದ್ದರೆ ಸೀದಾ ಮನೆಯೊಳಗೇ ಬರಲೆತ್ನಿಸುವ ಬುಲ್ಬುಲ್ಗಳೂ ಹೀಗೆ ಮಾತನಾಡುತ್ತವೆ. ಕೆಮ್ಮೀಸೆ ಪಿಕಳಾರ(ರೆಡ್ ವಿಸ್ಕರ್ಡ್ ಬುಲ್ಬುಲ್), ಕೆಂಪು ಬಾಲದ ಪಿಕಳಾರ(ರೆಡ್ ವೆಂಟೆಡ್ ಬುಲ್ಬುಲ್), ಕೆಂಪು ಕತ್ತಿನ ಪಿಕಳಾರ(ಫ್ಲೇಮ್ ತ್ರೋಟೆಡ್ ಬುಲ್ಬುಲ್)ಗಳೆಂಬ ೩ ವಿಧದ ಪಿಕಳಾರಗಳು ಮನೆಗೆ ಬರುತ್ತವೆ. ಇವುಗಳಲ್ಲಿ ಕೆಮ್ಮೀಸೆ ಮತ್ತು ಕೆಂಪು ಬಾಲದ ಪಿಕಳಾರಗಳು ಪ್ರತಿದಿನ ಭೇಟಿ ಮಾಡುವವುಗಳಾದರೆ, ಕೆಂಪು ಕತ್ತಿನ ಪಿಕಳಾರಗಳು ವಾರಕ್ಕೆ ಒಂದೆರಡು ಬಾರಿ ಬರುವ ಅತಿಥಿಗಳು. ಅನ್ನ,‌ ಚಪಾತಿಯಂತಹ ಯಾವುದೇ ಆಹಾರ ಹಾಕಿದರೂ ತಿನ್ನುತ್ತಾವಾದರೂ ಬಾಳೆಹಣ್ಣೆಂದರೆ ಪ್ರೀತಿ ಜಾಸ್ತಿ. ತಮ್ಮ ಪುಟ್ಟ ಕೊಕ್ಕಿನಲ್ಲಿ ದೊಡ್ಡ ಭಾಗವನ್ನಾರಿಸಿ, ಇರಿಸಿಕೊಳ್ಳುವಾಗ ಬೀಳಿಸಿಕೊಂಡು, ಮತ್ತೆ ಮತ್ತೊಂದು ಭಾಗವನ್ನು ಕಚ್ಚಿ ತಮಗೆ ಬೇಕಾದಷ್ಟು ತಿಂದು,‌ ಮರಿಗಳಿದ್ದರೆ ಅವುಗಳಿಗೆ ಆಹಾರವನ್ನು ಕಚ್ಚಿಕೊಂಡು ರಪ್ಪೆಂದು ಗೂಡಿಗೆ ಹಾರಿಹೋಗುತ್ತವೆ. ಇವುಗಳಿಗೆ ಚಿಕ್ಕ ಮರಿಗಳಿದ್ದರಂತೂ ತನ್ನ ತಂದೆ-ತಾಯಿಯ ಬಳಿ ತಿನ್ನಿಸುವಂತೆ ಕೇಳಿಕೊಳ್ಳುವ ರೀತಿ, ಅವುಗಳು ತಿನ್ನಿಸುವ ಪರಿ ನೋಡುವುದೇ ...

ತಿರುವು(ಅಂತಿಮ ಭಾಗ)

ಇಮೇಜ್
  ತಿರುವು(ಅಂತಿಮ ಭಾಗ) ಕಥೆಯನ್ನು ಮುಂದುವರಿಸುತ್ತಾ.. . ಹಾಗೆಲ್ಲ ಕೈಚೆಲ್ಲಿ ಕುಳಿತುಕೊಳ್ಳುವ ಹುಡುಗಿ ನಾನಲ್ಲ. ಆದರೆ, ಒಮ್ಮೆಗೇ ಬದುಕು ಇಷ್ಟೊಂದು ಸವಾಲುಗಳನ್ನು ಒಡ್ಡಿದರೆ ಎಂತು! ಅದನ್ನು ಸ್ವೀಕರಿಸುವುದೇ ಕಷ್ಟ, ಇನ್ನು ಅದೆಲ್ಲವನ್ನೂ ಎದುರಿಸಿ ನಿಲ್ಲುವುದು ನನ್ನ ಪಾಲಿಗೆ ಅಸಾಧ್ಯ ಎನ್ನಿಸುತ್ತಿತ್ತು‌. ಆದರೆ ನನ್ನ ಜೊತೆಗೆ ಅಪ್ಪ ನಿಂತಿದ್ದಾರೆ ಎಂದುಕೊಂಡು, ನಾನೇ ಒಂದು ನಿರ್ಧಾರಕ್ಕೆ ಬಂದೆ. ಮಿತೇಶನ ಬಳಿಯೇ ಕೇಳಬೇಕೆಂದು‌. ಆದರೆ ಇಷ್ಟು ದಿನ ಮಾತನಾಡಲು ಹಿಂಜರಿಯುತ್ತಿದ್ದವಳು, ಕೋಪಗೊಳ್ಳುತ್ತಿದ್ದವಳು ಒಮ್ಮೆಲೇ ಈ ವಿಷಯ ಕೇಳಿದರೆ, ಅವನು ನಿಜ ಹೇಳಲಾರ ಎಂದುಕೊಂಡೆ. ಜಗಳದ ನಂತರ ಒಂದು ವಾರ ಅವನ ಸುದ್ದಿ ಇರಲಿಲ್ಲ. ಮತ್ತೆ ಕರೆ ಬಂತು, ನನಗೆ ಸತ್ಯ ತಿಳಿದುಕೊಳ್ಳಲೇಬೇಕಿತ್ತು. ಹೊಸದಾಗಿ ಕೋಪವಿಲ್ಲದೇ ಮಾತನಾಡಿದೆ. ಅವನಿಗೆ ತಲೆಕೆಟ್ಟಿತೋ ಏನೋ, ಅಲೆಗಳ ರಭಸದಿಂದ ಕೂಡಿರುತ್ತಿದ್ದ ಮಾತಿನ ಸಾಗರ, ಒಮ್ಮೆಲೇ ಶಾಂತವಾಗಿದ್ದನ್ನು ಕೇಳಿ, ಏನೂ ಮಾತನಾಡದೇ ಕರೆಯನ್ನು ಕೊನೆಗೊಳಿಸಿದ.   ಮತ್ತೆ ಮರುದಿನ ಕರೆ‌ಮಾಡಿ ಏನೇನೋ ಒಟಗುಟ್ಟಿದ, ನಾನು ಅದಕ್ಕೆ ಕೋಪಗೊಂಡು ಕಿರುಚಾಡುವೆ ಎಂದುಕೊಂಡವನಿಗೆ ಮತ್ತೆ ನನ್ನ ಮೆಲುನುಡಿಗಳು ಚಾಟಿ ಬೀಸಿದಂತಿದ್ದವೋ ಏನೋ! ಕೇಳಿಯೇ ಬಿಟ್ಟ ಬದಲಾವಣೆಗೆ ಕಾರಣ ಏನೆಂದು! ಏನಿಲ್ಲ ಎಂದೆ. ಮತ್ತೆ ಮಾತಿಲ್ಲ.  ನಾನು ಎಷ್ಟು ಶಾಂತಳಾದಂತೆ ನಟಿಸುತ್ತಿದ್ದರೂ ಅವನು ಕೊಡುವ ಹಿಂಸೆಗೆ ಕೋಪ ನೆತ್ತಿಗೇರು...

ತಿರುವು(ಭಾಗ-೨)

ಇಮೇಜ್
ತಿರುವು(ಭಾಗ-೨) ಕಥೆಯನ್ನು ಮುಂದುವರಿಸುತ್ತಾ..... ಹೊಸ ಜಾಗ, ಹೊಸ ಊರು, ಹೊಸ ತಿರುವು, ಹೊಸ ಹೆಜ್ಜೆ, ಎಲ್ಲವೂ ಹೊಸತು, ಆದರೆ ಮನಸ್ಸು ಮಾತ್ರ ಹಳೆಯ ಲೋಕದಲ್ಲೇ ಇತ್ತು. ಆದರೆ ಮನೆಯಲ್ಲಿ ನಡೆದ ಅವಾಂತರಗಳ ಹೇಳುವವರಿರಲಿಲ್ಲ‌. ನಾನಾದರೂ ನೆಮ್ಮದಿಯಾಗಿರಲಿ ಎಂದು ಅವರು ಎಲ್ಲಾ ನೋವನ್ನೂ ಮುಚ್ಚಿಡುತ್ತಿದ್ದರು. ಎಲ್ಲವೂ ಹೊಸತಾಗಿ ಸಾಗುತ್ತಿತ್ತು ಎನ್ನುವಾಗಲೇ, ಮಿತೇಶ ಅದು ಹೇಗೋ ನನ್ನ ಫೋನಿನ ನಂಬರನ್ನು ಪಡೆದು, ಕರೆ ಮಾಡಿದ. ಇದೊಂದು ತೊಂದರೆ ತಪ್ಪಿತೆಂದುಕೊಂಡಿದ್ದೆ, ಆದರೆ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ತರ ಆಗಿತ್ತು ಇವನ ವಿಷಯದಲ್ಲಿ‌. ಊರಿಂದೂರಿಗೆ ಬಂದರೂ ಕಾಟವಂತೂ ತಪ್ಪಿರಲಿಲ್ಲ.  ಏನೇನೋ ಒಟಗುಟ್ಟಿದ, ಯಾವುದೂ ಕಿವಿಯಿಂದ ತಲೆಯನ್ನಂತೂ ತಲುಪಿರಲಿಲ್ಲ. ಒಂದು ಕರೆಗೆ ಸುಮ್ಮನಾದೆ, ಆದರೆ, ಅದು ಯಾವಾಗ ವಿಪರೀತವಾಯಿತೋ, ಆಗ ಅಮ್ಮನಿಗೆ ತಿಳಿಸಿ, ಅವನ ನಂಬರನ್ನು ಬ್ಲಾಕ್ ಮಾಡಿದೆ. ಎರಡು ದಿನದೊಳಗೆ ಮತ್ತೊಂದು ನಂಬರಿನಿಂದ ಕರೆ. ಪ್ರೀತಿ ಪ್ರೇಮ ಎಂದು ಎಷ್ಟೋ ಸಿನಿಮಾ ಶೈಲಿಯ ಮಾತುಗಳನ್ನಾಡಿದ. ಆದರೆ, ನನಗೊಂದು ಹಿಂಸೆಯಾಗಿತ್ತೇ ಹೊರತು ಪ್ರೀತಿ ಎನ್ನಿಸಲಿಲ್ಲ. ಆಶ್ಚರ್ಯ ಅನ್ನಿಸ್ತಾ? ಒಬ್ಬ ಅಷ್ಟು ಹಿಂದೆ ಬಿದ್ದು ಪ್ರೀತಿಸ್ತೀನಿ ಅಂದ್ರೂ, ಮನೇಲಿ ಹೇಳಿದ್ರೂ ಏನೂ ಅನ್ನಿಸದೆ, ಹಿಂಸೆ‌ ಎನ್ನುವ ನಾನೆಂತಾ ಕಲ್ಲು ಎಂತಲಾ? ಖಂಡಿತ ನಾನು ಕಲ್ಲಲ್ಲ. ಆದರೆ, ಒಂದು ಮಾತು ನನ್ನ ಅಭಿಪ್ರಾಯ ಕೇಳದೇ, ಯಾವ ಪರಿಸ್ಥಿತಿಯನ್ನೂ ಅ...

ತಿರುವು (ಭಾಗ - ೧)

ಇಮೇಜ್
ತಿರುವು (ಭಾಗ - ೧) ಕರೆ ಬಂದ ಕೂಡಲೇ, ಇದ್ದ ಕೆಲಸಗಳನ್ನು ಬದಿಗಿಟ್ಟು, ನನ್ನ ಮ್ಯಾನೇಜರಿಗೆ ತಿಳಿಸಿ, ನಾಲ್ಕು ದಿನಗಳ ರಜೆ ಪಡೆದು, ಸಿಕ್ಕ ಬಸ್ಸಿಗೆ ಟಿಕೇಟನ್ನು ಪಡೆದು ಹೊರಟೆ. ಮನದಲ್ಲಿ ಸಾವಿರ ದುಗುಡಗಳು, ಆತಂಕ, ಇನ್ನೊಬ್ಬರ ಸಾವಿಗೆ ಕಾರಣ ನಾನಾಗುವೆನೇ ಎಂಬ ಭಯ, ಅದರ ಮಧ್ಯೆ ಸಾವಿರ ಬಾರಿ ಏನು ಆಗದಿರಲೆಂದು ದೇವರಲ್ಲಿ ಮೊರೆ ಹೋಗುತ್ತಿದ್ದೆ. ಎಲ್ಲದರ ಮಧ್ಯೆ, ಪ್ರತಿ ಬಾರಿ, ಇದೇ ಕತೆ. ಬೊಗಳುವ ನಾಯಿ  ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬ ಮಾತಿನಂತೆ, ಇದು ನನ್ನನ್ನು ಹಣಿಸಲು ಮಾಡುತ್ತಿರುವ ಅವನ ಪ್ರಯತ್ನವಷ್ಟೇ ಎಂಬ ಭಂಡ ಧೈರ್ಯ. ೩೦‌ ಮೈಲಿಯ ದಾರಿ. ಕ್ರಮಿಸುತ್ತಾ ಒಂದೊಂದೇ ನೆನಪುಗಳ ಮೈಲಿಗಲ್ಲು ಪಾಸಾಗುತ್ತಿತ್ತು.. ಐದು ವರ್ಷಗಳ ಹಿಂದೆಯೇ, ಬೆಂಬಿಡದ ಭೂತವೊಂದು ನನ್ನ ಬೆನ್ನಟ್ಟಿತ್ತು. ಅವನು ನನ್ನನ್ನು ಅಕ್ಕನ ಮದುವೆಯಲ್ಲಿ ನೋಡಿದ್ದೇ ಮೊದಲು. ಅದೇ ದಿನ ತಂದೆಯ ಬಳಿ ಬಂದು, ಅವನು ನನ್ನನ್ನು ಇಷ್ಟ ಪಡುತ್ತಿರುವುದಾಗಿಯೂ, ಅವನಿಗೂ ನನಗೂ ಮದುವೆ ಮಾಡಿಸಬೇಕೆಂದು ಅವನ ಇಂಗಿತ‌ ವ್ಯಕ್ತಪಡಿಸಿದ. ಅಪ್ಪನಿಗೆ ದಿಗ್ಭ್ರಮೆ, ನಾನಂತೂ ಆಕಾಶ ತಲೆಯ ಮೇಲೆ ಬಿದ್ದವಳಂತಿದ್ದೆ. ನಾನೇನು ಸುಂದರಿಯಲ್ಲ. ಬಣ್ಣವೂ ಕಪ್ಪು, ಮಾತನಾಡುವವಳೂ ಅಲ್ಲ. ಅಲ್ಲದೇ, ಅವನನ್ನು ನಾನೊಮ್ಮೆ ದಿಟ್ಟಿಸಿ ನೋಡಿದ್ದೂ ಇಲ್ಲ. ಇದೆಂತಾ ಪ್ರೀತಿಯಪ್ಪಾ ಅಂದುಕೊಂಡೆ. ಅಪ್ಪ ಅವನ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, ಎಲ್ಲಿಯೋ ಸ್ವಲ್ಪ ಹುಡುಗಾಟಿಕೆಯ ಹುಡುಗ ...